Soundarya PU College

Welcome to Soundarya

Admissions open for 2023-24. Click here for more details.

Call us

080-28390024/ 9148457575

Call us

080-28390024/ 9148457575

ರಾಗಿ ಔತಣಕೂಟ

ಸೌಂದರ್ಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 21/09/2024 ರ ಶನಿವಾರದಂದು ಕನ್ನಡ ವಿಭಾಗದ ಸೌಂದರ್ಯಸುಧೆ ಸಾಹಿತ್ಯ ವೇದಿಕೆಯು ಪಠ್ಯಾಧಾರಿತ ರಾಗಿ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಗಿಮುದ್ದೆ ಪಾಠದ ಲೇಖಕರು ಹಾಗೂ ಸಾಹಿತಿಗಳು ಮತ್ತು ಪ್ರಜಾವಾಣಿ ದಿನಪತ್ರಿಕೆಯ ಉಪ ಸಂಪಾದಕರಾದ ಶ್ರೀ ಚ.ಹ ರಘುನಾಥ್ ಅವರು ಆಗಮಿಸಿದ್ದರು. ಪ್ರಸ್ತುತ ಸಂಕೀರ್ಣ ಜಗತ್ತಿನಲ್ಲಿ ಮಾನವ ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ ಎಂದರೆ ಅದು ಆಹಾರ ಸಮಸ್ಯೆಯಿಂದಾಗಿ, ಸಂಸ್ಕೃತಿ ಮೌಲ್ಯಗಳ ಆಗರವೆಂದರೆ ಅದು ಕರುನಾಡು ಮತ್ತು ಕರುನಾಡಿನ ರಾಗಿ ಸಂಸ್ಕೃತಿ. ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯವನ್ನು ನೀಡುವುದರೊಂದಿಗೆ ಇಂತಹ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿಯಾಗಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದರು. ಉಪ ಪ್ರಾಂಶುಪಾಲರಾದ ಕೃಪಾ ಆರ್ ದೇವ್ ಅವರು ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥರಾದ ಶ್ರೀ ಪರಮೇಶ ಅವರು ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ವಿವಿಧ ರಾಗಿ ಖಾದ್ಯಗಳನ್ನು ಜೊತೆಯಲ್ಲಿ ಕುಳಿತು ಸವಿದು ಸಂತಸಪಟ್ಟರು.

Scroll to Top

ENQUIRY FORM